Friday 14 June 2019

PRAVESHANOTHSAVA@ALSPS NARAYANAMANGALAM

ದಿನಾಂಕ ೦೬-೦೬-೨೦೧೯ ರಂದು alps ನಾರಾಯಣಮಂಗಲ ದಲ್ಲಿ ಪ್ರವೇಶೋತ್ಸವ ವು ಬಹಳ ವಿಜೃಂಭಣೆಯಿಂದ ಜರಗಿತು . ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯಾತಿಥಿಯಾಗಿ ಆಗಮಿಸಿದ   ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಸತ್ಯಶಂಕರಭಟ್ ಉಧ್ಘಾಟಿಸಿದರು . ಅವರು ಹೊಸ ವಿದ್ಯಾರ್ಥಿಗಳಿಗೆ   ಹೂಗುಚ್ಛವನ್ನು ನೀಡಿ  ಸ್ವಾಗತಿಸಿದರು. ಪ್ರಥಮಾಧ್ಯಾಪಕಿ ಮೇಬಲ್  ಮರಿಟ  ಡಿಸೋಜಾ ರವರು ಸಭಾ ಕಾರ್ಯಕ್ರಮದ ನೇತೃತ್ವ ವಹಿಸಿದರು . ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚಲಾಯಿತು . ನಿವೃತ್ತ ಮುಖ್ಯೋಪಾಧ್ಯಾಯರೂ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಯುತ ಗೋಪಾಲಕೃಷ್ಣಭಟ್ ,ಪಿ ಟಿ ಎ ಅದ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ  ಹೇಮಲತಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು ಶಾಲಾ ಅಧ್ಯಾಪಕ, ಅಧ್ಯಾಪಕಿಯರು  , ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು  


 








           


1 comment: